ಇರುಳ ತೆರೆ ಬೆಳಕಿನಲಿ
ಮೌನದ ಜಗ ಜಾತ್ರೆಯಲಿ
ಅಲೆ ತೊಯ್ದು ನಕ್ಷತ್ರ
ಎನ್ನ ಮನವ ಕೂಗಿರಲು
ನಿನ್ನ ನೆನಪಿನಲ್ಲಿ ಅಳುತ್ತಿದ್ದೆ
ನೀಲಾಂಬರ ಸ್ವಚ್ಚಚಾದರ
ಅರವಳಿಕೆಯ ಎಚ್ಚರ
ದಿಗಂತದ ದೇವಗಣಕ್ಕೆ
ನಿನ್ನ ಮುಖಲಾಂಚನ
ಮನ ನಿನ್ನ ಬಯಸಿತ್ತು
ಸತ್ಯವರಿಯದೇ ಮತ್ತೆ ಅತ್ತೆ
ಕಾಂತಮೊಗದವಳು ಏಕಾಂತ
ಮರೆಸಿ, ನನ್ನನ್ನಪ್ಪಿದಳು
ಹಾಲ್ಗೆನ್ನೆ, ಪುಟ್ಟಕಂಗಳೊಡತಿ
ನಿನ್ನಂತೆ ಇರುವಳು
ನಿನ್ನ ಮುದ್ದುಮಗಳು
ನಿನ್ನ ಸಾವನ್ನು ಮರೆಸಿದವಳು
No comments:
Post a Comment