ಕವಿತೆಗಳ ಹಾದಿಯಲ್ಲಿ ಸಾಗಿರುವ ನಿಮ್ಮ ಬಂಡಿಯಲ್ಲಿ ಕುಳಿತುಕೊಳ್ಳಲು ಒಂದಿನಿತು ಜಾಗ ನೀಡಿ, ದುಡ್ಡು ಕೇಳಲು ನೀವು ಬಂಡಿಯ ನಿರ್ವಾಹಕನಲ್ಲ, ನೀಡಲು ನಾನೇನು ಪ್ರಯಾಣಿಕನಲ್ಲ ಸ್ನೇಹದ ಕೊಂಡಿಯಲ್ಲಿ ನೀವು ತೂಗುತಿದ್ದಿರಿ, ಆತ್ಮೀಯನಿಗೆ ಬೇಸರವಯಿತೇನೋ ಎಂದೆನಿಸಿ ನಾನೂ ಕೂಡಿಕೊಂಡೆ...
ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!
Monday 11 June 2012
ಮೂರು ಗಿಡಗಳು...
ಸರಿರಾತ್ರಿ ಹನ್ನೆರಡರ
ನೀರವತೆಯಲ್ಲಿ
ಜಗ ಮೊಗೆದ ತಿಮಿರಲ್ಲಿ
ಆ ಗಿಡ್ಡ ಗಿಡದ್ದೇ ಅಳು
ಉಳಿದೆರಡು ಗಿಡಗಳಿಗೆ
ಚಂದ್ರ ಸುರಿಸಿದ ಬೆಳದಿಂಗಳು
ಎರಡಂತಸ್ತು ಮನೆ ಮಾಳಿಗೆಯ
ಚುಂಬಿಸಿತ್ತೊಂದು
ನನ್ನೆತ್ತರ ಕೈ ಎತ್ತಿದರೆ
ಮತ್ತೊಂದರ ತುದಿ
ಸೋಕುತ್ತದೆ
ನನ್ನ ಮಗುವಿನ ತುಟಿ
ಮೂರನೆಯದೋ
ಕೇವಲ ಅರ್ಧ ಅಡಿ
ಸುರಿದೆ ದಿನಕ್ಕೆರಡು
ಕೊಡ ನೀರ
ರಸ ಹೀರಿ
ಉಬ್ಬಲು ಗೊಬ್ಬರ
ಮೋಡ ಒಡೆಸಿ
ಕಟ್ಟೆ ಕಟ್ಟಿ
ಹಾದಿಬದಿ ರಸನೀರೆಲ್ಲ
ಹರಿಸಿದೆ
ಚಿಕ್ಕ ಗಿಡದಡಿಗೆ
ಕೊಡಕ್ಕೊಂದೊಂದು
ದಿನಕ್ಕೆರಡೆರಡಿಂಚು
ಬೆಳೆದರಳಿ ಹರಡಿತು ಮಿಂಚು
ಹೆಗಲೇರಿಸಿ ಬೆಳೆದ ಗಿಡ
ಹೆಗಲಪಟ್ಟಿ
ಅಗಲಿಸಿ ಮೆರೆದಿದೆ
ಹಸಿರೆಲೆ ಹೊದ್ದು
ಹೂಹಣ್ಣು ತೊನೆದು
ತೂಗಿ ಬಾಗಿ ನೆಗೆದು
ನಿನ್ನೆ ಬೆಳೆದು ನಿಂತ
ಆ ಮುದ್ದು ಗಿಡಕ್ಕೆ
ಮುತ್ತನಿಟ್ಟು ತಲೆ
ನೇವರಿಸುವಾಗ
ಯಾರೋ ಕಾಲೆಳೆದಂತೆ
ಬದಿಗೆ ಬಂದು ಬಾಗಿ ಬೇಸರಗೊಂಡೆ
ಗಿಡ್ಡ ಗಿಡವ ಬೆಳೆಸುವವಸರದಲ್ಲಿ
ಮಧ್ಯದಿ ನಿಂತ ಗಿಡವ
ಚಪ್ಪಲಿಯಡಿಗೆ
ಮೆಟ್ಟಿಬಿಟ್ಟಿದ್ದೆ ಪ್ರತಿದಿನ!
ನೀರೆರೆಯೋಣವೆಂದರೆ ಈಗ
ದೇಶದಲ್ಲೆಲ್ಲಾ
ಬಿರುಗಾಳಿ ಪ್ರತಿದಿನ!
Subscribe to:
Post Comments (Atom)
ಒಂದು ಸಾರ್ಥಕ್ಯದ ನಿರುಪಯೋಗತೆಯ ಕ್ಲಿಷೆ ಬರೆದಿಡುವ ಪ್ರಯತ್ನವಿದು. ಹಲ ಭಾವಗಳ ಕವಿತೆ ಗೊಂಚಲು!!!
ReplyDelete