ಚೂರು ಕಾಗದ ಸಾಕು
ಕಾಣದ ಗಾಳಿಯರಿಯಲು
ಮಿಣುಕು ದೀಪ್ತಿಯಲ್ಲಿದೆ
ಅದರೊಡಲ ನಿಜ ಶಕ್ತಿ
ತಂತಿಯೊಂದನ್ನಿಟ್ಟುಕೊಂಡು
ಮನೆಗೆ ಬೆಳಕ ತಂದ
ಚಿನ್ನದ ಹಾಳೆಯಲ್ಲಿ
ಅಣು ಬೇಧಿಸಿದಾತ
ಮೂರು ನಿಮಿಷವನ್ನು
ಮೂರು ದಿನ ಮಾಡಿದನೊಬ್ಬ
ಮೂರು ದಿನವನ್ನೂ
ಮೂರು ನಿಮಿಷ ಮಾಡಿಹೋದ
ಕಾಣದ ಕಾಲದೊಡನೆ
ಎಷ್ಟೊಂದು ಆಟ
ಪ್ರಪಂಚವೇ ಆಶ್ಚರ್ಯಗಳ
ಮೂಟೆ, ನಾನೂ ಒಬ್ಬ
ಮರೆಮಾಚಿ ನಿಂದ ದೇವ
ಇರುವುದ ಹಿಡಿದು
ಇಲ್ಲದಿದುದ ಕಂಡ ಮಾನವ
ಕಾಣದ ಕೈವಲ್ಯಗಳಿಗೆ ಚಿಹ್ನೆ
ಚಿಹ್ನೆ ಚಿಹ್ನೆ ಬೆರೆಸಿ
ಕೂಡಿಸಿ ಕಳೆಯಿಸಿ ಕೊರತೆಯ ನೀಗಿಸಿ
ಅದರಾಟ ಕಂಡು ಸವಾಲೆಸೆದ
ಒಪ್ಪಿಕೊಂಡ ಆ ಸೂಕ್ಷ್ಮ
ಮಾನವನನ್ನಪ್ಪಿಕೊಂಡಿತು
ಅರ್ಥವಾಗಲಿಲ್ಲ ??? ...
ReplyDeleteನಿಮ್ಮ ಪ್ರತಿಕ್ರಿಯೆ ಖುಷಿ ತಂದಿತು. ನಿಮಗಾಗಿ ಮತ್ತೊಮ್ಮೆ ಗೀಚುತ್ತೇನೆ. ವಂದನೆಗಳು...
ReplyDeleteಚೆನ್ನಾಗಿದೆ.
ReplyDeleteಹೌದು
ReplyDeleteಸೃಷ್ಟಿಯ ವೈಚಿತ್ರ್ಯವೇ ಹಾಗೆ ಹುಡುಕಿದರೆ ಮಾತ್ರ ಸಿಗುವಂತೆ.
ಕವಿತೆ ಖುಷಿ ಕೊಟ್ಟಿತು
ಕವಿತೆಯಲ್ಲಿ ಗಾಂಭೀರ್ಯ ವಿಚಾರಗಳು ಅಡಕವಾಗಿವೆ. ಸೂಕ್ಷ್ಮ ಚಿಂತನೆಯಿಂದ ನೋಡಬೇಕು. ಇಷ್ಟವಾಯಿತು...
ReplyDeleteಉತ್ತಮವಾಗಿದೆ....
ReplyDeleteಉತ್ತಮ ವಸ್ತುವಿನಿಂದ ಕೂಡಿದ ಕವಿತೆ ... ಚೆನ್ನಾಗಿದೆ... ಶುಭದಿನ.
ReplyDeleteಕಾಣಿಸಿಕೊ೦ಡ
ReplyDeleteಚೂರು ಕಾಗದ ಸಾಕು
ಕಾಣದ ಗಾಳಿಯರಿಯಲು
ನಿಮ್ಮ ಕಲ್ಪನೆ ನಿಜವಾಗಲೂ
ಅದ್ಬುತ ಸರ್
ಅರ್ಥಗರ್ಭಿತ ಸಾಲುಗಳು ಗಟ್ಟಿ ಪದಗಳೊಂದಿಗೆ ಲಾಸ್ಯವಾಡಿದೆ. ವಂದನೆಗಳು ಮೋಹನಣ್ಣ.
ReplyDelete