ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 18 September 2011

ಪಯಣ ಮುಗಿಸಿ ವಿಮಾನ ಹತ್ತಿದೆ..

ಬಂದದ್ದು ಬೆಳ್ಳಂಬೆಳಗ್ಗೆ
ತಂಗಿದ್ದು ಮೂರು ದಿನ
ಕಂಡದ್ದು ಬೆಳಕು ಮತ್ತು
ಅದರ ಅಂಚು ಕತ್ತಲು

ಸಿಕ್ಕವರು ನೂರು ಜನ
ನಕ್ಕವರು ಮೂರೇ ಜನ
ಹೊಕ್ಕವರು ಎರಡೇ ಜನ
ಹೊತ್ತವರು ನಾಲ್ಕು ಜನ

ದುಡಿದದ್ದು ಲೆಕ್ಕವಿಲ್ಲ
ಉಳಿದದ್ದು ಗೊತ್ತೇ ಇಲ್ಲ
ಅಳಿದದ್ದು ಬರಲೇ ಇಲ್ಲ
ಈಗ ಅದ್ಯಾವುದು ನೆನಪಿಲ್ಲ

ಮೂರು ದಿನ ಮುಗಿಯಿತು
ತಂದ ವಿಮಾನ ಕರೆಯಿತು
ಬೆಂಕಿಗೆ ಮನೆ ಸುಟ್ಟಿತು
ಮಂದಿ ಗುಂಪು ಹೊರಟಿತು

ಕೊರಗಿದವು ನೂರು ಮನ
ಹೆಂಡತಿ, ಮಗು, ನನ್ನ ಜನ
ಮರೆಸಿಬಿಟ್ಟಿತು ಕಾಲ ಚಲನ
ಹೊತ್ತವರಿಗೆ ಜೀವ ನಮನ

No comments:

Post a Comment