ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 18 September 2011

ಯೋಚಿಸಿ ನೋಡಿ...

ಮಾನವ ಮಹಾನಗರ ಕಟ್ಟಿದ
ಗಗನ ಚುಂಬಿ ಕಟ್ಟಡಗಳು
ನಿಲ್ಲಲು ಜಾಗವೇ ಇಲ್ಲ
ಸಿಕ್ಕ ಜಾಗದಲ್ಲಿ ನಿಂತರೆ
ಕಟ್ಟಡದ ತುದಿ ಕಾಣದು
ಸಮತೋಲನ ಕೋನ ಇಲ್ಲ
ಕಷ್ಟ ಪಟ್ಟು ಮೆಟ್ಟಿಲು ಹತ್ತಿ
ಕೆಳ ಹಿಣುಕಿದರೆ ನೆಲ ಕಾಣದು

ದೊಡ್ಡ ಮನೆಗಳು ಕಂಡವು
ಒಳ ಹೊಕ್ಕು ನೋಡಿದರೆ
ಗಂಡ, ಹೆಂಡತಿ, ಮಗು
ಅದೇ ಸಣ್ಣ ಸಂಸಾರ

ಎಲ್ಲೆಲ್ಲು ಜ್ಞಾನ ತುಂಬಿತ್ತು
ಆದರೂ ನಿರ್ಧಾರಕ್ಕೆ ಬರದ ಜನ
ಅಂಗಡಿ ತುಂಬೆಲ್ಲ ಔಷಧಗಳು
ಆಸ್ಪತ್ರೆ ತುಂಬಾ ರೋಗಿಗಳು
ಜನಗಳು ಆಸೆಗಳನ್ನು ಗುಣಿಸಿದ್ದರು
ಆದರೆ ಮೌಲ್ಯವನ್ನು ಕಳೆದಿದ್ದರು
ಅತಿಯಾಗಿ ಮಾತನಾಡುತಿದ್ದರು
ಕಡಿಮೆ ಪ್ರೀತಿಸುತಿದ್ದರು
ಹೆಚ್ಚೆಚ್ಚು ದ್ವೆಶಿಸುತಿದ್ದರು

ಚಂದ್ರನ ಎದೆ ತಟ್ಟಿ ಬಂದಿದ್ದರು
ಪಕ್ಕದ ಬೀದಿಯನ್ನೇ ದಾಟಲಾಗುತ್ತಿಲ್ಲ
ನೆರೆಮನೆ ಮಂದಿಯ ಮುಖ ಕಂಡಿಲ್ಲ
ಹೊರ ಜಗತ್ತಿಗೆ ಅಡಿ ಇಟ್ಟ ಜನಗಳಿಗೆ
ಒಳ ಜಗತ್ತು ಕೈಗೆ ಸಿಗಲೇ ಇಲ್ಲ
ದುಡ್ಡು ಕೂಡಿ ಕೂಡಿ ಬೆಳೆಯುತ್ತಿತ್ತು
ಗುಣ ಕಳೆದು ಕಳೆದು ಕರಗುತ್ತಿತ್ತು
ಸ್ವಾತಂತ್ರ್ಯ ಕಣ್ಣಿಗೆ ಕಾಣುತಿತ್ತು
ನಗುವಿನಲ್ಲಿ ಅದೇ ಕೊರತೆ ಇತ್ತು
ಗಲ್ಲಿ ಗಲ್ಲಿಯಲ್ಲೂ ತಿಂದಷ್ಟು ಊಟ
ಆದರೂ ಅಪೌಷ್ಟಿಕತೆಯಿಂದ ಸತ್ತ ಮಕ್ಕಳು

ಒಂದು ಮನೆಯಲ್ಲಿ ಎರಡು ಸಂಬಳ
ಎಲ್ಲರೆದರು ಸಂತಸದ ಗೃಹಪ್ರವೇಶ
ಒಳ ಹೊಕ್ಕಿದರೆ ಎರಡು ಮನೆ
ನಡುವೆ ನ್ಯಾಯಾಂಗದಿಂದ ವಿಚ್ಛೇದನ
ಮಕ್ಕಳು ಅರ್ಧನಾರೀಶ್ವರರು

ಹೊರಗಣ್ಣಿಗೆ ಜಗತ್ತು ನಗುತಿತ್ತು
ಒಳಗಣ್ಣಲ್ಲಿ ಜಗವದು ಸೊರಗಿತ್ತು..

No comments:

Post a Comment