ನೆರಳಿಗೆ ರಕ್ತ ಹೊದಿಕೆ
ಮುಡಿದವಳ ಬಿನ್ನಾಣ ಬೀಗಿ ತೂಗಿ
ಗಿಡದಡಿಮುಡಿಗೆ ಉರಿ ತುರಿಕೆ!
ಸೂರ್ಯನೊಡನೆ ಕೆಚ್ಚಲ ಹಾಲು ಕರೆದರು
ಊಟಕ್ಕೆ ಕೆನೆ ಮೊಸರು
ಬಗೆ ಬಗೆ ಸೊಪ್ಪಿನ ಸಾರು
ಗದ್ದೆಯಲ್ಲಿ ಗಿಡ ಕೊರಳಳು ಜೋರು!
ಬೀಸಾಡಿದ್ದ ಬಿರ್ಯಾನಿ ಪೊಟ್ಟಣದಲ್ಲಿ
ಅಳುತ್ತಿತ್ತು ಎರಡು ಕೋಳಿ ಕಾಲು
ಅದೊಂಟಿಯಲ್ಲ, ತಲೆ ಸವರಿ ಕುಳಿತಿವೆ
ಪ್ರತಿಭಟನೆಗೆ ನೂರು ಅಕ್ಕಿ ಕಾಳು!
ಹಸಿವ ಹಾವಿನ ಬಸಿರಿಗೆ ಸುರಿದಿದ್ದ
ಬಂಡಿ ಬಾಡು, ತಡಿಯಲ್ಲಿ ರುಚಿಗೆ ತತ್ತಿಗರ್ಭ
ಜಗದಿ ಆತನಿಗೆ ಶ್ರೇಷ್ಠ ತಾಯಂತೆ, ಮರೆತುಬಿಟ್ಟ
ತತ್ತಿಗರ್ಭವೂ ಮಗು ಹೆರುವ ತಾಯಗರ್ಭ!
ವಾದಕ್ಕೊಂದು ಪ್ರತಿವಾದ ಕೂಡಿಸಿಲ್ಲ
ಒಂದು ಕೊಂದು ಮತ್ತೊಂದು ಹೋರಾಟ ನಟನೆ
ಹುಲ್ಲು ತಿಂದು ಕೊಬ್ಬಿದ ಜಿಂಕೆ ಕೊಂದು
ಹಸಿವ ನೀಗಿದ ಹುಲಿ ಚಿರತೆಯದು ನೈಜ ಘಟನೆ!
ಕಹಿ ಒಗ್ಗದ ನಾಲಗೆಗೆ ಸಿಹಿ ಹೂರಣ
ತಿನ್ನುವುದೇ ಪಾಪವಾದರೆ ಅವನ ಜಗದಲ್ಲಿ
ಉಪ್ಪು ಖಾರ ನೀರುಳ್ಳಿ ಮೆಣಸು ಬೆಳ್ಳುಳ್ಳಿ
ಶುಚಿ ರುಚಿ ಇಡಬಾರದಾಗಿತ್ತು ನಾಲಗೆಯಲ್ಲಿ!
ಅವನನ್ನು ನಂಬಿದ್ದು ಸಹ್ಯವಾದರೆ
ಅವನಾಣತಿ ಅಲ್ಲಲ್ಲಿ ಎಲ್ಲೆಲ್ಲಿ ಉಸಿರಿದ್ದು ಸತ್ಯ!
ಒಳ್ಳೆ ಕವನ . ಅಡಿಗರ ಕವನವನ್ನು ಶಬ್ದಗಳು ನೆನಪಿಸಿತು. ಚೆನ್ನಾಗಿದೆ ಮೋಹನ್ ಜೀ :-)
ReplyDelete"ಶಹಬ್ಬಾಷ್...!"
ReplyDelete